Pages

Friday, May 11, 2012

[ವಿಜಾಪುರ] ವಿವಿಧ ಉದ್ಯೌಗಕ್ಕಾಗಿ ಅರ್ಜಿ ಆಹ್ವಾನ

Source: Kannadamma

ವಿಜಾಪುರ,10- ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮ ನಿ.ವಿಜಾಪೂರ 2012-13ರ ಸಾಲಿಗೆ ಸ್ವಯಂ ಉದ್ಯೌಗಕ್ಕಾಗಿ ವಿವಿಧ ಯೋಜನೆಗಳಲ್ಲಿ ಅರ್ಹ ಹಿಂದುಳಿದ ವರ್ಗಗಳ ಜನರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಚೈತನ್ಯ ಸಬ್ಸಿಡಿ ಕಂ ಸಾಪ್ಟಲೋನ್ ಯೋಜನೆ, ಅರಿವು ಶೈಕ್ಷಣೀಕ ಸಾಲ ಯೋಜನೆ, ಚೈತನ್ಯ ಸ್ವಯಂ ಉದ್ಯೌಗ ನೇರಸಾಲ ಯೋಜನೆ, ಕಿರುಸಾಲ ಯೋಜನೆ, ಸಾಂಪ್ರದಾಯಿಕ ವೃತ್ತಿದಾರರ ಮತ್ತು ಕುಶಲಕರ್ಮಿಗಳ ಯೋಜನೆ, ಕುಂಬಾರಿಕೆ ಅಭಿವೃದ್ದಿ ಯೋಜನೆ, ಗಂಗಾ ಕಲ್ಯಾಣ ಯೋಜನೆ, ನೀರಾವರಿ ಯೋಜನೆ, ಸವಿತಾ ಸಮಾಜ ಅಭಿವೃದ್ದಿ ಯೋಜನೆ, ಅಲೆಮಾರಿ ಅರೆ ಅಲೆಮಾರಿ ಜನಾಂಗದವರಿಗೆ ಆರ್ಥಿಕ ನೆರವು ಯೋಜನೆ ಹಾಗೂ ರಾಷ್ಟ್ತ್ರೀಯ ಹಿಂದುಳಿದ ವರ್ಗಗಳ ಹಣಕಾಸು ಮತ್ತು ಅಭಿವೃದ್ದಿ ನಿಗಮದ ನ್ಯೂ ಸ್ವರ್ಣಿಮಾ ಮತ್ತು ವಿವಿಧ ಸಾಲ ಯೋಜನೆಗಳಲ್ಲಿ ಸಾಲ ಸೌಲಭ್ಯಕ್ಕಾಗಿ ಹಿಂದುಳಿದ ವರ್ಗಗಳ ಜನರು ಅರ್ಜಿ ಸಲ್ಲಿಸಬಹುದು.
ಅರ್ಜಿದಾರರು ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ, 3ಬಿಗೆ ಸೇರಿದವರಾಗಿದ್ದು, ಕುಟುಂಬದ ವಾರ್ಷಿಕ ವರಮಾನ 22 ಸಾವಿರ ರೂ.ಗ ಹಾಗೂ ರಾಷ್ಟ್ತ್ರೀಯ ಹಿಂದುಳಿದ ವರ್ಗಗಳ ಹಣಕಾಸು ಮತ್ತು ಅಭಿವೃದ್ದಿ ನಿಗಮ ಯೋಜನೆಗಳಲ್ಲಿ ಗ್ರಾಮಿಣ ಪ್ರದೇಶದವರಿಗೆ 40 ಸಾವಿರ ರೂ. ನಗರ ಪ್ರದೇಶದವರಿಗೆ 55 ಸಾವಿರ ರೂ.ಗಿಂತ ಕಡಿಮೆ ಇರಬೇಕು.  ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಸ್ತಾವೇಜುಗಳೊಂದಿಗೆ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ವಿಜಾಪುರ ಜಿಲ್ಲಾ ವ್ಯವಸ್ಥಾಪಕರ ಕಚೇರಿಗೆ  ದಿ: 30-6-2012ರೊಳಗಾಗಿ ಕಳುಹಿಸಬೇಕು. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮ, ವಿಜಾಪುರ ಇವರ ಕಚೇರಿಯನ್ನು ಸಂಪರ್ಕಿಸಿ ಪಡೆಯಬಹುದಾಗಿದೆ.

No comments: